Monday, April 13, 2026
Homeನಿಮ್ಮ ಜಿಲ್ಲೆಭ್ರಷ್ಟ ಬಿಪಿಎಂಗಳ ಅಟ್ಟಹಾಸ; ಅಂಚೆ ಇಲಾಖೆ ಎದುರು ಭೀಮ ಆರ್ಮಿ ಗರ್ಜನೆ!

ಭ್ರಷ್ಟ ಬಿಪಿಎಂಗಳ ಅಟ್ಟಹಾಸ; ಅಂಚೆ ಇಲಾಖೆ ಎದುರು ಭೀಮ ಆರ್ಮಿ ಗರ್ಜನೆ!

ಬೀದರ್: ಜಿಲ್ಲೆಯ ಗ್ರಾಮೀಣ ಭಾಗದ ಬ್ರಾಂಚ್ ಪೋಸ್ಟ್ ಮಾಸ್ಟರ್‌ಗಳು (BPM) ಸಾರ್ವಜನಿಕರ ಸೇವೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದಲ್ಲದೆ, ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ಕಾರ್ಯಕರ್ತರು ಇಂದು ಬೀದರ್ ಅಂಚೆ ಕಚೇರಿ ಉಪ ವಿಭಾಗದ ಸಹಾಯಕ ಅಧೀಕ್ಷಕರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು.
ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ದೀಲಿಪಕುಮಾರ ವರ್ಮಾ ಅವರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ, ಅಂಚೆ ಇಲಾಖೆಯ ಕೆಳಹಂತದ ಅಧಿಕಾರಿಗಳ ವಿರುದ್ಧ ಗಂಭೀರ ದೂರುಗಳನ್ನು ದಾಖಲಿಸಲಾಯಿತು.
ಸುದ್ದಿಯ ಮುಖ್ಯಾಂಶಗಳು:
ಹಣ ನೀಡದಿದ್ದರೆ ಪೆನ್ಷನ್ ಇಲ್ಲ: ಹಿರಿಯ ನಾಗರಿಕರು ಹಾಗೂ ವಿಧವೆಯರಿಗೆ ಸರ್ಕಾರ ನೀಡುವ ಮಾಶಾಸನವನ್ನು ತಲುಪಿಸಲು ಬಿಪಿಎಂಗಳು 20 ರೂ.ನಿಂದ ಹಿಡಿದು 100 ರೂ.ವರೆಗೆ ಲಂಚ ವಸೂಲಿ ಮಾಡುತ್ತಿದ್ದಾರೆ. ಸರ್ಕಾರಿ ಸಂಬಳ ಪಡೆಯುತ್ತಿದ್ದರೂ ಬಡವರ ಹಣಕ್ಕೆ ಕೈಹಾಕುತ್ತಿರುವುದು ಅಕ್ಷಮ್ಯ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಆಧಾರ್ ಕಾರ್ಡ್ ವಿತರಣೆಯಲ್ಲಿ ಬೇಜವಾಬ್ದಾರಿ: ಆಧಾರ್ ಕಾರ್ಡ್‌ಗಳು ಕಚೇರಿಗೆ ಬಂದು 20 ದಿನ ಕಳೆದರೂ ಸಾರ್ವಜನಿಕರಿಗೆ ವಿತರಿಸುತ್ತಿಲ್ಲ. ದೂರವಾಣಿ ಸಂಖ್ಯೆ ಇದ್ದರೂ ಕರೆ ಮಾಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದ ಸಾರ್ವಜನಿಕರಿಗೆ “ಟೇಬಲ್ ಮೇಲೆ ಇವೆ, ನೀವೇ ಹುಡುಕಿಕೊಳ್ಳಿ” ಎಂಬ ಉದ್ಧಟತನದ ಉತ್ತರ ನೀಡುತ್ತಿದ್ದಾರೆ.
ಕಾಲಮಿತಿಯ ಸೇವೆ ಮರೀಚಿಕೆ: ವಿದ್ಯಾರ್ಥಿಗಳ ಉದ್ಯೋಗದ ಪತ್ರಗಳು ಹಾಗೂ ಪ್ರಮುಖ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸದೆ ಲಕ್ಷಾಂತರ ಯುವಕರ ಭವಿಷ್ಯದ ಜೊತೆ ಬಿಪಿಎಂಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ತಕ್ಷಣದ ಅಮಾನತಿಗೆ ಆಗ್ರಹ:
ಸಾರ್ವಜನಿಕರ ಕೆಲಸದಲ್ಲಿ ಅಕ್ರಮ ಎಸಗುತ್ತಿರುವ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ ಸಂಬಂಧಪಟ್ಟ ಬಿಪಿಎಂಗಳನ್ನು ಕೂಡಲೇ ಅಮಾನತುಗೊಳಿಸಿ ಶಿಸ್ತು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಭೀಮ ಆರ್ಮಿ ಎಚ್ಚರಿಸಿದೆ.
ಈ ಪ್ರತಿಭಟನೆಯಲ್ಲಿ ಮುಖಂಡರಾದ ಶ್ರೀಕಾಂತ್ ಸಾಗರ್, ಪೀಟರ್, ಪ್ರವೀಣ್ ಗುಪ್ತ, ಅಂಬರೀಶ್ ಕೋಸಮ, ಶಿವಾಜಿ ಗಾಯಕ್ವಾಡ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments