Tuesday, February 17, 2026
Homeನಿಮ್ಮ ಜಿಲ್ಲೆಕೆಬಿಜೆಎನ್ಎಲ್ ಇಂಜಿನಿಯರಗಳ ಉತ್ತಮ ಕಾರ್ಯನಿರ್ವಹಣೆಯಿಂದ ಆಲಮಟ್ಟಿ ಡ್ಯಾಂಗೆ ತಪ್ಪಿದ ಪ್ರವಾಹ ಆತಂಕ :: ದಾಖಲೆ ನಿರ್ಮಿಸಿದ...

ಕೆಬಿಜೆಎನ್ಎಲ್ ಇಂಜಿನಿಯರಗಳ ಉತ್ತಮ ಕಾರ್ಯನಿರ್ವಹಣೆಯಿಂದ ಆಲಮಟ್ಟಿ ಡ್ಯಾಂಗೆ ತಪ್ಪಿದ ಪ್ರವಾಹ ಆತಂಕ :: ದಾಖಲೆ ನಿರ್ಮಿಸಿದ ಒಳ ಮತ್ತು ಹೊರ ಹರಿವು

ಮುಂಗಾರು ಹಂಗಾಮಿನಲ್ಲಿ ಆಲಮಟ್ಟಿ ಜಲಾಶಯಕ್ಕೆ ಅಪಾರ ನೀರು ಹರಿದು ಬಂದರೂ, ಕೆಬಿಜೆಎನ್‌ಎಲ್ ಅಭಿಯಂತರರು ಸಮರ್ಥವಾಗಿ ನಿರ್ವಹಣೆ ಮಾಡಿದ್ದರಿಂದ ನದಿ ತೀರದಲ್ಲಿ ಪ್ರವಾಹ ಉಂಟಾಗಿಲ್ಲ. ಜಲಾಶಯಕ್ಕೆ ಮೇ 19 ರಿಂದ ಇದುವರೆಗೆ 462.366 ಟಿಎಂಸಿ ನೀರು ಹರಿದು ಬಂದಿದ್ದು, 367.320 ಟಿಎಂಸಿ ನೀರನ್ನು ನದಿಗೆ ಹರಿಸಲಾಗಿದೆ. ಜುಲೈ 31 ರಂದು ಗರಿಷ್ಠ 1.57 ಲಕ್ಷ ಕ್ಯುಸೆಕ್ ಒಳಹರಿವು ದಾಖಲಾಗಿತ್ತು.

  • ಕೆಬಿಜೆಎನ್‌ಎಲ್‌ ಅಭಿಯಂತರರ ಸಮರ್ಥ ಕಾರ್ಯಕ್ಕೆ ತಪ್ಪಿದ ಹಾನಿ
  • 5 ಲಕ್ಷ ಕ್ಯುಸೆಕ್‌ಗಿಂತ ಹೆಚ್ಚು ನೀರು ಹರಿಸಿದರೆ ಮಸೂತಿ ಜನಕ್ಕೆ ಸಮಸ್ಯೆ
  • ಇದುವರೆಗೆ ಜಲಾಶಯಕ್ಕೆ 462.366 ಟಿಎಂಸಿ ನೀರು ಹರಿದು ಬಂದಿದೆ. ಅದರಲ್ಲಿ 367.320 ಟಿಎಂಸಿ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗಿದೆ

ವಿಜಯಪುರ: ಆಲಮಟ್ಟಿ ಜಲಾಶಯಕ್ಕೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಪಾರ ಪ್ರಮಾಣದ ನೀರು ಹರಿದು ಬಂದರೂ ಕೆಬಿಜೆಎನ್‌ಎಲ್‌ ಅಭಿಯಂತರರು ಸಮರ್ಥವಾಗಿ ನಿರ್ವಹಣೆ ಮಾಡಿದ ಪರಿಣಾಮ ನದಿ ತೀರದಲ್ಲಿ ಇದುವರೆಗೆ ಯಾವುದೇ ಪ್ರವಾಹ ಸ್ಥಿತಿ ಉಂಟಾಗಿಲ್ಲ.

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುವ ಭಾರಿ ಪ್ರಮಾಣದ ಮಳೆಯಿಂದಾಗಿ ಕೃಷ್ಣಾ ಹಾಗೂ ಅದರ ಉಪ ನದಿಗಳಿಗೆ ಅಬ್ಬರ ಉಂಟಾಗಿ ಆಲಮಟ್ಟಿ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತದೆ. ಜಲಾಶಯಕ್ಕೆ ಹರಿದು ಬರುವ ನೀರನ್ನು ನದಿ ಪಾತ್ರಕ್ಕೆ ಹರಿಬಿಟ್ಟಾಗ ನದಿ ತೀರದ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗುವುದು ಪ್ರತಿ ವರ್ಷ ಕಂಡು ಬರುತ್ತದೆ. ಕೆಲ ಬಾರಿ ಜನವಸತಿ ನುಗ್ಗಿದ್ದು ಇದೆ. ಕಳೆದ ವರ್ಷ ಕೂಡ ನದಿ ತೀರದ ಕೆಲ ಜಮೀನುಗಳಿಗೆ ಹಾನಿಯಾಗಿತ್ತು. ಆದರೆ ಈ ಬಾರಿ ಈ ಪ್ರವಾಹ ಉಂಟಾಗದಂತೆ ಕೆಬಿಜೆಎನ್‌ಎಲ್‌ ಅಭಿಯಂತರರು ಉತ್ತಮವಾಗಿ ನೀರು ನಿರ್ವಹಣೆ ಮಾಡಿದ್ದರಿಂದ ಪ್ರವಾಹ ಸ್ಥಿತಿ ಎದುರಾಗಿಲ್ಲ.

ಪ್ರಸಕ್ತ ಸಾಲಿನಲ್ಲಿ ಆಲಮಟ್ಟಿ ಜಲಾಶಯಕ್ಕೆ ಮೇ.19 ಒಳಹರಿವು ಆಂಭವಾಗಿದೆ
ಅಂದಿನಿಂದ ಇದುವರೆಗೆ ಜಲಾಶಯಕ್ಕೆ 462.366 ಟಿಎಂಸಿ ನೀರು ಹರಿದು ಬಂದಿದೆ. ಅದರಲ್ಲಿ 367.320 ಟಿಎಂಸಿ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗಿದೆ. ಈ ಬಾರಿ ಜು.31ರಂದು ಜಲಾಶಯಕ್ಕೆ 1.57 ಲಕ್ಷ ಕ್ಯುಸೆಕ್‌ ನೀರು ಹರಿದು ಬಂದಿರುವುದು ಈ ವರ್ಷದ ಗರಿಷ್ಠ ಪ್ರಮಾಣದ ಒಳಹರಿವು ಆಗಿದೆ. ಮಂಗಳವಾರ(ಆ.19) 1.75 ಲಕ್ಷ ಕ್ಯುಸೆಕ್‌ ನೀರನ್ನು ನದಿ ಹರಿಸುತ್ತಿರುವುದು ಇದುವರೆಗಿನ ಗರಿಷ್ಠ ಪ್ರಮಾಣದ ಹೊರ ಹರಿವು ಆಗಿದೆ.

ಗರಿಷ್ಠ 519.60 ಮೀಟರ್‌ ಎತ್ತರದಲ್ಲಿ123.081 ಟಿಎಂಸಿ ನೀರು ಸಂಗ್ರಹದ ಆಲಮಟ್ಟಿ ಜಲಾಶಯದಲ್ಲಿ ಮಂಗಳವಾರ ಬೆಳಗ್ಗೆ 8ಕ್ಕೆ 519.05 ಮೀಟರ್‌ ಎತ್ತರದಲ್ಲಿ 113.757 ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳಹರಿವು 88,126 ಕ್ಯುಸೆಕ್‌ ಇದ್ದರೆ ಹೊರ ಹರಿವಿನ ಪ್ರಮಾಣ 1.35 ಲಕ್ಷ ಕ್ಯುಸೆಕ್‌ ಇತ್ತು. ಒಳಹರಿವು ಹೆಚ್ಚಾಗುವ ಸಾಧ್ಯತೆಯಿಂದ ಬೆಳಗ್ಗೆ 10ಕ್ಕೆ ಹೊರಹರಿವಿನ ಪ್ರಮಾಣವನ್ನು 1.75 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಯಿತು.

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುವ ಮಳೆ ಪ್ರಮಾಣ ಹಾಗೂ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ಹರಿದು ನೀರು ಪ್ರಮಾಣ ಅನುಸರಿಸಿ ಆಲಮಟ್ಟಿ ಡ್ಯಾಂನಿಂದ ಹಂತ ಹಂತವಾಗಿ ನದಿ ಪಾತ್ರಕ್ಕೆ ನೀರು ಹರಿಸಲಾಗಿದೆ. ಇದುವರೆಗೆ ಯಾವುದೇ ಪ್ರವಾಹ ಉಂಟಾಗಿಲ್ಲ ಎಂದಿದ್ದಾರೆ ಡಿ.ಬಸವರಾಜ, ಮುಖ್ಯಅಭಿಯಂತರರು, ಕೆಬಿಜೆಎನ್‌ಎಲ್‌ ಆಲಮಟ್ಟಿ

ಆಲಮಟ್ಟಿ ಡ್ಯಾಂನಿಂದ 2.70 ಲಕ್ಷ ಕ್ಯುಸೆಕ್‌ ನೀರು ಹರಿಸಿದಾಗ ತಾಲೂಕಿನ ಅರಳದಿನ್ನಿ, ಯಲಗೂರು, ಯಲಮ್ಮನ ಬೂದಿಹಾಳ, ಮಸೂತಿ ಗ್ರಾಮಗಳ ನದಿ ತೀರದ ಜಮೀನುಗಳು ಜಲಾವೃತಗೊಳ್ಳುವ ಸಾಧ್ಯತೆ ಇದೆ. 5 ಲಕ್ಷ ಕ್ಯುಸೆಕ್‌ಗಿಂತ ಹೆಚ್ಚು ನೀರು ಹರಿಸಿದಾಗ ಮಸೂತಿ ಗ್ರಾಮದ ಜನವಸತಿ ಪ್ರದೇಶಕ್ಕೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ ಎ.ಡಿ.ಅಮರಾವದಗಿ, ತಹಸೀಲ್ದಾರ್‌ ನಿಡಗುಂದಿ

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments